My photo
ಕರಾವಳಿ ಹುಡುಗಿ :)
Showing posts with label ಸಾಂಬಾರ್ / Sambar / Curry/ Sidedishes. Show all posts
Showing posts with label ಸಾಂಬಾರ್ / Sambar / Curry/ Sidedishes. Show all posts

Tuesday, April 6, 2010

ಉಡುಪಿ / ಮಂಗಳೂರು ಸಾಂಬಾರ್ (Sambar / Curry )


ಬೇಕಾಗುವ ಸಾಮಗ್ರಿಗಳು:

ತರಕಾರಿ - 2 ಕಪ್ (ಬದನೇಕಾಯಿ + ನುಗ್ಗೆಕಾಯಿ / ಮಂಗಳೂರು ಸೌತೆಕಾಯಿ / ಬೀನ್ಸ್+ ಕ್ಯಾರೆಟ್ - ಮುಂತಾದ ತರಕಾರಿಗಳನ್ನು ಉಪಯೋಗಿಸಬಹುದು)
ತೊಗರಿಬೇಳೆ -
¼ ಕಪ್

ಸಾಂಬಾರ್ ಈರುಳ್ಳಿ - 6-8 (ಇಲ್ಲದಿದ್ದರೆ 1 ಈರುಳ್ಳಿಯನ್ನು ಹೆಚ್ಚಿ ಉಪಯೋಗಿಸಬಹುದು)

ಟೊಮೇಟೊ - 1
ಬೆಲ್ಲ - 2 ಚಮಚ
ಹುಣಸೆ ರಸ - ಲಿಂಬೆ ಗಾತ್ರದ ಹುಣಸೆಹಣ್ಣಿನಿಂದ ತೆಗೆದು

ಎಣ್ಣೆ - 2 ಚಮಚ


ಮಸಾಲೆಗೆ:
ಎಣ್ಣೆ -
1 ಚಮಚ
ಮೆಂತೆ -
½ ಚಮಚ
ಉದ್ದಿನಬೇಳೆ-
1 ಚಮಚ
ಮೆಣಸು (ಬ್ಯಾಡಗಿ)
- 6-8
ಕೊತ್ತಂಬರಿ ಬೀಜ -
1 ½ ಚಮಚ
ಜೀರಿಗೆ -
½ ಚಮಚ
ಹಳದಿ ಪುಡಿ - ಚಿಟಿಕೆ

ಕರಿಬೇವು -
6 ಎಲೆ
ತೆಂಗಿನಕಾಯಿ -
¼ ಕಪ್ ತುರಿದು

ಒಗ್ಗರಣೆಗೆ
:
ಎಣ್ಣೆ -
2 ಚಮಚ
ಸಾಸಿವೆ
- ½ ಚಮಚ
ಹಿಂಗು
- ½ ಚಮಚ

ಒಣ ಮೆಣಸು - 1
ಕರಿಬೇವು -
6 ಎಲೆ


ತಯಾರಿಸುವ ವಿಧಾನ :
ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ
, ಮೆಂತೆ ಸ್ವಲ್ಪ ಬಣ್ಣ ಚೇಂಜ್ ಆಗುವ ತನಕ ಹುರಿದು, ನಂತರ ಉದ್ದಿನಬೇಳೆ ಸೇರಿಸಿ, ಸ್ವಲ್ಪ ಕೆಂಪಗಾಗುವ ತನಕ ಹುರಿಯಿರಿ. ಇದಕ್ಕೆ ಕರಿಬೇವು, ಕೊತ್ತಂಬರಿ ಬೀಜ, ಜೀರಿಗೆ ಸೇರಿಸಿ ಚೆನ್ನಾಗಿ ಪರಿಮಳ ಬರುವ ತನಕ ಹುರಿಯಿರಿ. ಮಸಾಲೆ ಹುರಿಯುವಾಗ ಸೀದು ಹೋಗದಂತೆ ನೋಡಿಕೊಳ್ಳಬೇಕು. ಇದನ್ನು ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ. ತೆಂಗಿನತುರಿಯನ್ನು ಸ್ವಲ್ಪ ಕೆಂಬಣ್ಣ ಬರುವ ತನಕ ಹುರಿಯಿರಿ. ತಣ್ಣಗಾದ ನಂತರ ಈ ಮಸಾಲೆಯನ್ನು ರುಬ್ಬಿಡಿ.


ತೊಗರಿಬೇಳೆಯನ್ನು ತೊಳೆದುಕೊಂಡು ಕುಕ್ಕರಿನಲ್ಲಿ ಬೇಯಿಸಿ.
ಬಾಣಲೆಯಲ್ಲಿ 2 ಚಮಚ ಎಣ್ಣೆ ಸೇರಿಸಿಕೊಂಡು ಈರುಳ್ಳಿಯನ್ನು ಹುರಿದು, ಇದಕ್ಕೆ
ಹೆಚ್ಚಿಟ್ಟ ತರಕಾರಿ ಸೇರಿಸಿ ಸ್ವಲ್ಪ ಹುರಿಯಿರಿ. ನಂತರ ಹೆಚ್ಚಿಟ್ಟ ಟೊಮೇಟೊ ಹಾಗೂ ಒಂದು ಕಪ್ ನೀರು ಸೇರಿಸಿ ಬೇಯಿಸಲು ಇಡಿ. ತರಕಾರಿ ಬೇಯುತ್ತ ಬಂದಾಗ, ಇದಕ್ಕೆ ತೊಗರಿಬೇಳೆ, ರುಬ್ಬಿಟ್ಟ ಮಸಾಲೆ, ಹುಳಿ, ಉಪ್ಪು, ಬೆಲ್ಲ ಮತ್ತು ಬೇಕಾದಷ್ಟು ನೀರು ಸೇರಿಸಿಕೊಂಡು ಸೇರಿಸಿ 10ನಿಮಿಷ ಹದ ಉರಿಯಲ್ಲಿ ಕುದಿಸಿರಿ. ಕೊನೆಯಲ್ಲಿ ಒಗ್ಗರಣೆ ಸೇರಿಸಿ. ಈ ಸಾಂಬಾರನ್ನು ಇಡ್ಲಿ, ದೋಸೆ ಅಥವಾ ಅನ್ನದೊಂದಿಗೆ ಉಪಯೋಗಿಸಬಹುದು.

ನಾನು ಮಂಗಳೂರು ರಸಂ (ಸಾರು) ಮಾಡಲು ಕೂಡ ಇದೆ ಮಸಾಲೆ ಉಪಯೋಗಿಸ್ತೇನೆ...ಟೊಮೇಟೊ ಕಟ್ ಮಾಡಿ 1 ಕಪ್ ನೀರಿನಲ್ಲಿ 10 ನಿಮಿಷ ಬೇಯಿಸಿ ನಂತರ ಇದೇ ಮಸಾಲೆ ಪುಡಿ + ಎರಡು ಚಮಚ ತೆಂಗಿನ ತುರಿ (ಹುರಿದು ಅಥವಾ ಹುರಿಯದೆ) , ಸ್ವಲ್ಪ pepper ಪುಡಿ, ಹುಳಿ, ಬೆಲ್ಲ ಹಾಗೂ 1 ಕಪ್ ನೀರು ಸೇರಿಸಿ ಕುದಿಸಿ, ಕೊನೆಯಲ್ಲಿ ಸೇಮ್ ಒಗ್ಗರಣೆ ಸೇರಿಸಿದರೆ ಸಾರು ರೆಡಿ.
ಈ ಸಾರಿನಲ್ಲಿ ಬೆಳ್ಳುಳ್ಳಿ ಅಥವಾ ಈರುಳ್ಳಿ ಯನ್ನು ಸೇರಿಸುವುದಿಲ್ಲ.ಆದರೆ ನಾನು ಈರುಳ್ಳಿ ಯನ್ನು ಫ್ರೈ ಮಾಡಿ ಸೇರಿಸುತ್ತೇನೆ.

Wednesday, February 17, 2010

Baghare Baingan

ಜೋಳದ ರೊಟ್ಟಿ ಹಾಗು ಎಣ್ಣೆಗಾಯಿ ನನ್ನ ಫೇವರಿಟ್ ಡಿಶ್ ಗಳಲ್ಲೊಂದು. ಎಣ್ಣೆಗಾಯಿ ಮಾಡಲು ಸಮಯ ತೆಗೆದುಕೊಳ್ಳುತ್ತದೆ, ಆದರೆ ಎಣ್ಣೆಗಾಯಿಯಷ್ಟೇ ರುಚಿಯಾಗಿರುವ Baghare Baingan ಮಾಡಲು ತುಂಬಾ ಸುಲಭ. ಇದು ಒಂದು ಹೈದರಾಬಾದಿ ಡಿಶ್.
(Recipe source: Monsoonspice.com)


ಬೇಕಾಗುವ ಸಾಮಗ್ರಿಗಳು:
ಸಣ್ಣ ಬದನೇಕಾಯಿ- 6
ಎಣ್ಣೆ - 4 ಟೇಬಲ್ ಚಮಚ
ಈರುಳ್ಳಿ - 1 ಕಪ್ (ಸಣ್ಣಗೆ ಹೆಚ್ಚಿ)
ತೆಂಗಿನಕಾಯಿ
ತುರಿ - 1/2 ಕಪ್
ನೆಲಗಡಲೆ - 2 ಟೇಬಲ್ ಚಮಚ
ಎಳ್ಳು - 1 ಚಮಚ
ಕೊತಂಬರಿ ಬೀಜ - 1 ಚಮಚ
ಹಳದಿ ಪುಡಿ - ಸ್ವಲ್ಪ
ಬ್ಯಾಡಗಿ ಮೆಣಸು - 6-8 (ಖಾರಕ್ಕೆ ತಕ್ಕಂತೆ)
ಗೋಡಂಬಿ- 10 (optional)
ಬೆಲ್ಲ ಪುಡಿ - 1 ಚಮಚ
ಉಪ್ಪು - ರುಚಿಗೆ ತಕ್ಕಂತೆ
ಹುಣಸೆ ರಸ - ಸಣ್ಣ ನಿಂಬೆ ಗಾತ್ರದ ಹುಣಸೆ ಹಣ್ಣಿನಿಂದ ತೆಗೆದು
ಒಗ್ಗರಣೆಗೆ - ಎಣ್ಣೆ, ಸಾಸಿವೆ, ಬೆಳ್ಳುಳ್ಳಿ, ಕರಿಬೇವು

ಮಾಡುವ ವಿಧಾನ:
ಬದನೆಕಾಯಿಯನ್ನು ತೊಳೆದು ಒರೆಸಿಕೊಂಡು ‘+’ ಆಕಾರದಲ್ಲಿ ಮುಕ್ಕಾಲು ಭಾಗದ ವರೆಗೆ ಸೀಳಿ.
ಒಂದು ಬಾಣಲೆಯಲ್ಲಿ ಅರ್ಧ ಚಮಚ ಎಣ್ಣೆ ಹಾಕಿಕೊಂಡು ಕೊತ್ತಂಬರಿ, ಎಳ್ಳು, ಮೆಣಸನ್ನು ಒಂದೊಂದಾಗಿ ಹುರಿದು ತೆಗೆದಿಡಿ.
ನಂತರ ಇದೇ ಪಾತ್ರೆಯಲ್ಲಿ ನೆಲಗಡಲೆ ಹಾಗು ಗೋಡಂಬಿ ಹಾಕಿ ಹುರಿದಿಟ್ಟುಕೊಳ್ಳಿ. ಕೊನೆಯಲ್ಲಿ ತೆಂಗಿನ ತುರಿಯನ್ನು ಸೇರಿಸಿಕೊಂಡು ಸ್ವಲ್ಪ ಕೆಂಪಗೆ ಬರುವ ವರೆಗೆ ಹುರಿದುಕೊಳ್ಳಿ.
ಎಲ್ಲಾ ಮಸಾಲೆ ಸಾಮಗ್ರಿಗಳನ್ನು ಸೇರಿಸಿಕೊಂಡು ಮಿಕ್ಸಿಯಲ್ಲಿ ಬೇಕಾದಷ್ಟು ನೀರು ಸೇರಿಸಿಕೊಂಡು ರುಬ್ಬಿಕೊಳ್ಳಿ.


ಈಗ ಬಾಣಲೆಯಲ್ಲಿ 2 ಟೇಬಲ್ ಚಮಚ ಎಣ್ಣೆಯೊಂದಿಗೆ ಸೀಳಿದ ಬದನೆಕಾಯಿಯನ್ನು ಸಣ್ಣ ಉರಿಯಲ್ಲಿ ಮಗುಚುತ್ತಾ ಹುರಿದು (15-20 ನಿಮಿಷ) ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ.

ಈಗ
ಒಗ್ಗರಣೆ ಸೇರಿಸಿಕೊಂಡು, ಈರುಳ್ಳಿ ಯನ್ನು ಚೆನ್ನಾಗಿ ಹುರಿದು, ಮಸಾಲೆ ಹಾಗು ಬೇಕಾದಷ್ಟು ನೀರು ಸೇರಿಸಿಕೊಂಡು ಸಣ್ಣ ಉರಿಯಲ್ಲಿ 10 ನಿಮಿಷ ಕುದಿಸಿರಿ. ಇದಕ್ಕೆ ಹುರಿದಿಟ್ಟ ಬದನೆಕಾಯಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು, ಹುಣಸೆ ರಸ, ಬೆಲ್ಲ ಸೇರಿಸಿ ಸಣ್ಣ ಉರಿಯಲ್ಲಿ 10 ನಿಮಿಷ ಕುದಿಸಿರಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.
ಇದನ್ನು ಚಪಾತಿ
, ರೊಟ್ಟಿ, ಅಥವಾ ಅನ್ನದೊಂದಿಗೆ ತಿನ್ನಬಹುದು.

Tuesday, June 2, 2009

ಮೊಳಕೆ ಕಾಳು - ಬಸಳೆ ಸೊಪ್ಪು ಸಾಂಬಾರ್


ಬೇಕಾಗುವ ಸಾಮಗ್ರಿಗಳು:
ಬಸಳೆ - ½ ಕೆ. ಜಿ.
ಮೊಳಕೆ ಕಾಳು (ಹೆಸರು ಕಾಳು ಅಥವಾ ಹುರುಳಿ ಕಾಳು)- 1 ಕಪ್
ಈರುಳ್ಳಿ - ¼ ಕಪ್
ಟೊಮೇಟೊ - ¼ ಕಪ್
ಹುಣಸೆಹಣ್ಣಿನ ರಸ - ಸಣ್ಣ ನಿಂಬೆ ಗಾತ್ರದ ಹುಣಸೆಹಣ್ಣಿನಿಂದ ತೆಗೆದು
ಬೆಲ್ಲ - ಸ್ವಲ್ಪ (ಬೇಕಿದ್ದರೆ ಮಾತ್ರ)
ಉಪ್ಪು - ರುಚಿಗೆ ತಕ್ಕಷ್ಟು
ಒಗ್ಗರೆಣೆಗೆ- ಎಣ್ಣೆ, ಕರಿಬೇವು, ಸಾಸಿವೆ, ಬೆಳ್ಳುಳ್ಳಿ,

ಮಸಾಲೆಗೆ:
ತೆಂಗಿನಕಾಯಿ ತುರಿ - 1 ಕಪ್
ಬ್ಯಾಡಗಿ ಮೆಣಸು - 5-6
ಕೊತ್ತಂಬರಿ ಬೀಜ - 2 ಚಮಚ
ಜೀರಿಗೆ - 1 ಚಮಚ
ಮೆಂತೆ - 6-8 ಬೀಜ
ಹಳದಿ ಪುಡಿ - ಚಿಟಿಕೆ

ಮಾಡುವ ವಿಧಾನ:
ಬಸಳೆ ಸೊಪ್ಪನ್ನು ದಂಟಿನಿಂದ ಬೇರ್ಪಡಿಸಿ, ತೊಳೆದು ಇಟ್ಟುಕೊಳ್ಳಬೇಕು.
ಬಸಳೆ ದಂಟನ್ನು 2-3 ಇಂಚು ಉದ್ದದ ತುಂಡು ಮಾಡಿಕೊಂಡು, ಮೊಳಕೆ ಕಾಳು ಸೇರಿಸಿ, ಕುಕ್ಕರಿನಲ್ಲಿ ಬೇಯಿಸಿಟ್ಟುಕೊಳ್ಳಬೇಕು.
ಮಸಾಲೆಯ ಎಲ್ಲ ಸಾಮಗ್ರಿಗಳನ್ನು ಒಂದೊಂದಾಗಿ ಪರಿಮಳ ಬರುವ ತನಕ ಹುರಿಯಬೇಕು. ಕೊನೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಮೆಣಸನ್ನು ಹುರಿಯಬೇಕು. ಈ ಮಸಾಲೆ ಸಾಮಗ್ರಿಗಳನ್ನು ತೆಂಗಿನತುರಿ ಸೇರಿಸಿ , ಸ್ವಲ್ಪ ನೀರು ಸೇರಿಸಿಕೊಂಡು ರುಬ್ಬಿಟ್ಟು ಕೊಳ್ಳಬೇಕು.
ಬೇಯಿಸಿದ ದಂಟು, ಕಾಳು, ತುಂಡು ಮಾಡಿದ ಸೊಪ್ಪು, ಟೊಮೇಟೊ, ಈರುಳ್ಳಿ, ಹುಣಸೆ ರಸ, ಉಪ್ಪು, ಸ್ವಲ್ಪ ಬೆಲ್ಲ ಸೇರಿಸಿ 5 ನಿಮಿಷ ಕುದಿಸಬೇಕು. ಕೊನೆಯಲ್ಲಿ ರುಬ್ಬಿದ ಮಸಾಲೆ ಸೇರಿಸಿ, 5-10 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ, ಒಲೆಯಿಂದ ಇಳಿಸಬೇಕು. ಕೊನೆಯಲ್ಲಿ ಒಗ್ಗರಣೆ ಸೇರಿಸಿ.