My photo
ಕರಾವಳಿ ಹುಡುಗಿ :)

Tuesday, July 28, 2009

Gendadadya / Kendadadya - ಕೆಂಡದಡ್ಯ / ಗೆಂಡದಡ್ಯ

Gendadadya or Kendadadya is a traditional delicacy of Mangalore. Genda (=tulu) or Kenda (=Kannada) reffers to ‘burning charcoal’ and Adya is ‘Kadubu or steamed rice dumpling/cake’. The name Kendadadya derives from the way it is prepared. Unlike other preparations, the speciality of this dish is that, it is baked on both the sides (top & bottom).


The main ingredients needed for this dish are cucumber, rice, jaggery, coconut and oil/Ghee. The batter prepared with the mentioned ingredinets is poured on a flat earthen vessel placed on a traditional fire place (called Ole in Kannada /Chula in Hindi). Another earthen vessel filled with hot red burning charcoal is placed just above the batter. The bottom vessel is heated using a slow and steady flame with a non smoky wood.


The blend of oil (preferably coconut oil), coconut, cucumber and Jaggery gives an amazing flavour to this dish. This is a great evening snack along with hot Coffee or Tea. This dish is slowly getting extinct our villages because of the fact that preparation method needs lot of skills interms of two side cooking and time required for the preparation. Here I have tried to adopt a simple and convenient method to make this preparation.





Ingredients:
White Rice - 2 cups
Grated cucumber - ~2 cup (In general, yellowish, ready to ripe cucumbers are being used. I have used 2 green cucumbers)
Jaggery - ½ - ¾ cup scrapped (can be changed according to your taste)
Grated cocnut – ¼ cup
Salt- ½ spoon
Oil or Ghee – 3-4 table spoon

Preperation:
1. Soak rice in sufficient amount of water for 4-5 hours.
2. Peel and grate the cucumber.
3. Squeeze the grated cucmber by hand and take out maximum amount of water. This water can be used for grinding rice.
4. Now grind rice by adding minimum amount of cucumber water. (Once you add Jaggery, the batter turns out watery, so try to use minimum amount of water).
5. To this thick ground rice batter, add scrapped Jaggery, coconut, salt and grated cucumber and mix nicely. The consistency should be thicker than Idly batter.
5. Centre a rack in the oven and preheat the oven to 400F
6. Add 2 tablespoon of oil in a baking pan (I have used 8x4x2 inch pan) and pour the batter. Cover the top with a thin layer of oil. At this point fried onion slices can also be sprinkled at the top.
7. Bake this for 40 - 45 minutes. Kendadadya is ready when it turns golden brown color.
8. Once cooled, Slice it using a long knife, and enjoy with hot tea or Coffee.

Serves- 10-12 Pieces




Sending this to RCI-UDUPI & MANGALOREAN CUISINE hosted by SIA an event started by LAKSHMI.


ಕೆಂಡದಡ್ಯ / ಗೆಂಡದಡ್ಯ [ಕೆಂಡ (=ಕನ್ನಡ); ಗೆಂಡ (=ತುಳು); ಅಡ್ಯ = ಕಡುಬು (ತುಳು)] :
ಮಳೆಗಾಲ ಬಂತೆಂದರೆ ಮಂಗಳೂರಿನಲ್ಲಿ ಹೆಚ್ಚಾಗಿ ಎಲ್ಲರ ಮನೆಯ ಹಿತ್ತಲಿನಲ್ಲಿಯೂ ಸೌತೆಕಾಯಿ (ಮಂಗಳೂರುಸೌತೆ), ಮುಳ್ಳುಸೌತೆ (ಸೌತೆಕಾಯಿ), ಬೆಂಡೆಕಾಯಿ, ತೊಂಡೆಕಾಯಿ, ಸೋರೆಕಾಯಿ, ಪಡುವಲಕಾಯಿ, ಹೀರೆಕಾಯಿ, ಅಲಸಂಡೆ ಮುಂತಾದ ತರಕಾರಿಗಳನ್ನು ಬೆಳೆಸುತ್ತಾರೆ. ಚೆನ್ನಾಗಿ ಬಲಿತ (ಹಣ್ಣಾಗಲು ತಯಾರಾದ, ಹಳದಿ ಬಣ್ಣದ) ಮುಳ್ಳುಸೌತೆ ಕೆಂಡದಡ್ಯ ಮಾಡಲು ಉತ್ತಮ. ಈ ತಿಂಡಿಯ ವಿಶೀಷತೆಯೆಂದರೆ, ಇದನ್ನು ಮೇಲೆ ಹಾಗು ಕೆಳಗೆ ಎರಡೂ ಕಡೆಯಿಂದ ಬೇಯಿಸಬೇಕು.
ಸಾಂಪ್ರದಾಯಿಕವಾಗಿ ಕೆಂಡದಡ್ಯ ಮಾಡುವ ವಿಧಾನ ತಲೆತಲಾಂತರಗಳಿಂದ ಬಂದುದು. ಇದನ್ನು ಹೆಚ್ಚಾಗಿ ದಪ್ಪ ತಳದ ಮಣ್ಣಿನ ಪಾತ್ರೆಯಲ್ಲಿ ಮಾಡುತ್ತಾರೆ. ಸ್ವಲ್ಪ ಕೊಬ್ಬರಿ ಎಣ್ಣೆ ಹಾಕಿ ಮಿಶ್ರಣವನ್ನು ಹರಡಿ, ಈ ಮಿಶ್ರಣದ ಸ್ವಲ್ಪವೇ ಮೇಲ್ಭಾಗದಲ್ಲಿ ಇನ್ನೊಂದು ಪಾತ್ರೆಯನ್ನಿಟ್ಟು ನಿಗಿನಿಗಿಸುವ ಕೆಂಡವನ್ನು ಮೇಲಿನ ಪಾತ್ರೆಯಲ್ಲಿ ತುಂಬುತ್ತಾರೆ. ಇದೇ ಸಮಯದಲ್ಲಿ ಕೆಳಭಾಗದ ಪಾತ್ರೆಯನ್ನು ಸ್ವಲ್ಪ ಉರಿಯಲ್ಲಿ ಅಥವಾ ಕೆಂಡದಲ್ಲಿ ಹದವಾಗಿ ಬೇಯಿಸಲಾಗುತ್ತದೆ.
ಹೀಗೆ ತಯಾರಾದ ಈ ತಿಂಡಿಯ ರುಚಿಯನ್ನು ಓವೆನ್ ನಲ್ಲಿ ಮಾಡಿದರೆ ಬರಲು ಸಾಧ್ಯವಿಲ್ಲವಾದರೂ, ಓವೆನ್ ವಿಧಾನ ನಗರದ ಅಡುಗೆ ಮನೆಯಲ್ಲೂ ಮಾಡಲು ಸುಲಭ.

ಕೆಂಡದಡ್ಯ / ಗೆಂಡದಡ್ಯ ಮಾಡಲು ಬೇಕಾಗುವ ಸಾಮಗ್ರಿಗಳು:

ಅಕ್ಕಿ - 2 ಕಪ್
ಮುಳ್ಳುಸೌತೆ / ಸೌತೆಕಾಯಿ - 2 ಕಪ್, ತುರಿದು
ಬೆಲ್ಲ - ½ - ¾ ಕಪ್ (ಸಿಹಿಗೆ ಹೊಂದಿಕೊಂಡು)
ತೆಂಗಿನಕಾಯಿ - ¼ ಕಪ್, ತುರಿದು
ಉಪ್ಪು - ½ - ಚಮಚ
ಎಣ್ಣೆ / ತುಪ್ಪ - 3-4 ಟೇಬಲ್ ಚಮಚ

ಮಾಡುವ ವಿಧಾನ :
ಅಕ್ಕಿಯನ್ನು ನೀರಿನಲ್ಲಿ 4-5 ಗಂಟೆಗಳ ಕಾಲ ನೆನೆಸಿ ತೊಳೆದಿಟ್ಟುಕೊಳ್ಳಿ
ಸಿಪ್ಪೆ ಸುಲಿದ ಸೌತೆಕಾಯಿಯನ್ನು ತುರಿಯಬೇಕು. ಇದರಲ್ಲಿ ನೀರಿನ ಅಂಶ ಜಾಸ್ತಿ ಇರುವುದರಿಂದ ನೀರನ್ನು ಹಿಂಡಿಟ್ಟುಕೊಳ್ಳುವುದು ಉತ್ತಮ.
ಅಕ್ಕಿಯನ್ನು ಸ್ವಲ್ಪವೇ ನೀರು ಹಾಕಿಕೊಂಡು ಗಟ್ಟಿಯಾಗಿ ರುಬ್ಬಬೇಕು.
ನಂತರ ತುರಿದ ಸೌತೆ ಕಾಯಿ, ಬೆಲ್ಲ, ತೆಂಗಿನ ತುರಿ, ಉಪ್ಪು ಸೇರಿಸಿಕೊಂಡು ಚೆನ್ನಾಗಿ ಕಲಸಬೇಕು.
ಈ ಮಿಶ್ರಣದಲ್ಲಿ ನೀರಿನ ಅಂಶ ಹೆಚ್ಚಾಗದಂತೆ ತುಂಬಾ ಎಚ್ಚರ ವಹಿಸಬೇಕು.
ಒಂದು ಓವೆನ್ ನಲ್ಲಿ ಇಡಬಹುದಾದ ಪಾತ್ರೆಯಲ್ಲಿ 2 ಟೇಬಲ್ ಸ್ಪೂನ್ ಎಣ್ಣೆ ಅಥವಾ ತುಪ್ಪವನ್ನು ಹಾಕಿಕೊಂಡು ಕಲಸಿಟ್ಟ ಅಕ್ಕಿ ಮಿಶ್ರಣವನ್ನು ಸುರಿಯಬೇಕು. ಇದರ ಮೇಲ್ಭಾಗದಲ್ಲಿ ಸ್ವಲ್ಪ ಎಣ್ಣೆ ಹಾಕಿಕೊಂಡು ಎಲ್ಲಾ ಭಾಗಕ್ಕೆ ಹರಡಬೇಕು. ಬೇಕಿದ್ದರೆ ಹುರಿದ ಈರುಳ್ಳಿಯನ್ನು ಸೇರಿಸಬಹುದು.
ಈ ಪಾತ್ರೆಯನ್ನು ಓವೆನ್ ನ ಮಧ್ಯದ rackನಲ್ಲಿಟ್ಟು 400Fನಲ್ಲಿ 40-45 ನಿಮಿಷ ಬೇಯಿಸಬೇಕು.
ಬೇಕಿದ್ದರೆ 30ನಿಮಿಷದ ನಂತರ ಕೆಂಡದಡ್ಯವನ್ನು ಮಗುಚಿ ಪುನ ಬೇಯಿಸಬಹುದು.
ಚೆನ್ನಾಗಿ ಬೆಂದ ಕೆಂಡದಡ್ಯದ ಮೇಲ್ಭಾಗ ಹೊಂಬಣ್ಣಕ್ಕೆ ತಿರುಗಿರುತ್ತದೆ. ಸ್ವಲ್ಪ ತಣ್ಣಗಾದ ನಂತರ ಇದನ್ನು ತುಂಡು ಮಾಡಿಕೊಂಡು ಬಿಸಿ ಬಿಸಿ ಕಾಫೀ ಅಥವಾ ಟೀಯೊಂದಿಗೆ ಸವಿಯಲು ಕೊಡಿ.

ಈ ತಿಂಡಿ ಹಳ್ಳಿಯಲ್ಲೂ ಈಗ ಕಾಣಸಿಗಲು ಕಷ್ಟವಾಗಿದೆ. ಅಂಥಹ ನಶಿಸುತ್ತಿರುವ ತಿಂಡಿ ಕೆಲವಾದರೂ ಅಡುಗೆ ಮನೆಗಳಲ್ಲಿ ಮತ್ತೆ ಕಾಣಬಂದರೆ ತುಂಬಾ ಸಂತೋಷ..
(ಮಂಗಳೂರಿನ ಎ. ಬಿ. ಶೆಟ್ಟಿ ಸರ್ಕಲ್ ಬಳಿ ಇರುವ Kochin Bakeryಯಲ್ಲಿ ಒಳ್ಳೆಯ ಕೆಂಡದಡ್ಯ ಸಿಗುತ್ತದೆ)

Thursday, July 23, 2009

ಕ್ಯಾರೆಟ್ ಹಲ್ವ / CARROT HALWA

ಬೇಕಾಗುವ ಸಾಮಗ್ರಿಗಳು:
ಕ್ಯಾರೆಟ್ (ತುರಿದುಕೊಂಡು) – 4 ಕಪ್
ಹಾಲು - 2 ಕಪ್
ಸಕ್ಕರೆ - 1 ಕಪ್
ಏಲಕ್ಕಿ ಪುಡಿ - ಸ್ವಲ್ಪ
ಗೋಡಂಬಿ - 2 ಟೇಬಲ್ ಚಮಚ
ದ್ರಾಕ್ಷಿ - 2 ಟೇಬಲ್ ಚಮಚ
ತುಪ್ಪ - 2 ಟೇಬಲ್ ಚಮಚ

ಮಾಡುವ ವಿಧಾನ :
ಕ್ಯಾರೆಟ್ ನ್ನು ತೊಳೆದು ಒರೆಸಿಕೊಂಡು, ತುರಿದಿಟ್ಟುಕೊಳ್ಳಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಹಾಕಿಕೊಂಡು ಗೋಡಂಬಿಯನ್ನು ಹುರಿದು ಬದಿಯಲ್ಲಿಡಿ. ನಂತರ ಇದಕ್ಕೆ ತುರಿದ ಕ್ಯಾರೆಟ್ ನ್ನು ಹಾಕಿ 10 ನಿಮಿಷ ಬಾಡಿಸಿಕೊಳ್ಳಿ. ಈ ತುರಿಗೆ ಹಾಲು ಸೇರಿಸಿ, ಚೆನ್ನಾಗಿ ಬೇಯಲು ಬಿಡಿ. (ಹಾಲು ಮತ್ತು ತುರಿದ ಕ್ಯಾರೆಟ್ ನ್ನು ಕುಕ್ಕರಿನಲ್ಲಿ ಕೂಡ ಬೇಯಿಸಬಹುದು) . ಹಾಲು ಆವಿಯಾದ ನಂತರ ಇದಕ್ಕೆ ಸಕ್ಕರೆ ಮತ್ತು ದ್ರಾಕ್ಷಿ ಸೇರಿಸಿ ಚೆನ್ನಾಗಿ ಮಗುಚಿರಿ. ಕೊನೆಯಲ್ಲಿ ಇದು ತಳ ಬಿಡಲು ಶುರುವಾದಾಗ, ಏಲಕ್ಕಿ ಪುಡಿ ಹಾಗು ಗೋಡಂಬಿ ಸೇರಿಸಿ, ಒಲೆಯಿಂದ ಇಳಿಸಿ, ಬೇಕಾದ ಪಾತ್ರೆಗೆ ಹಾಕಿ ಇಡಿರಿ. ಇದನ್ನು ಬಿಸಿಯಾಗಿ ಅಥವಾ ಫ್ರಿಜ್ ನಲ್ಲಿಟ್ಟು ತಂಪಾದ ನಂತರ ಕೂಡ ತಿನ್ನಬಹುದು.

Sunday, July 12, 2009

ಮಾವಿನಹಣ್ಣು ಗೊಜ್ಜು / MANGO GOJJU

ಬೇಕಾಗುವ ಸಾಮಗ್ರಿಗಳು:
ಮಾವಿನಹಣ್ಣು - 2-3 (ಇದಕ್ಕೆ ಸ್ವಲ್ಪ ಹುಳಿಯಾಗಿರುವ ಮಾವಿನ ಹಣ್ಣು ಉಪಯೋಗಿಸಿದರೆ ತುಂಬ ರುಚಿಯಾಗುತ್ತದೆ).
ಹಸಿಮೆಣಸು - 1
ಉಪ್ಪು - ರುಚಿಗೆ ತಕ್ಕಷ್ಟು
ಬೆಲ್ಲ - ಸ್ವಲ್ಪ
ಒಗ್ಗರಣೆಗೆ :- ಎಣ್ಣೆ- 1 ಚಮಚ, ಸಾಸಿವೆ, ಸ್ವಲ್ಪ ಇಂಗು, ಕರಿಬೇವು, ಕೆಂಪು ಮೆಣಸು-1.

ಮಾವಿನಹಣ್ಣನ್ನು ಕುದಿಯುವ ನೀರಿನಲ್ಲಿ 10 ನಿಮಿಷ ಬೇಯಿಸಿಕೊಳ್ಳಿ. ನಂತರ ಮಾವಿನ ಹಣ್ಣಿನ ಸಿಪ್ಪೆಯನ್ನು ಬೇರ್ಪಡಿಸಿ, ಹಣ್ಣನ್ನು ಚೆನ್ನಾಗಿ ಕೈಯಿಂದ ಹಿಚುಕಬೇಕು. ಇದಕ್ಕೆ ಹೆಚ್ಚಿದ ಹಸಿಮೆಣಸು, ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಗು 1/4 ಗ್ಲಾಸ್ ನೀರುಸೇರಿಸಿ 5 ನಿಮಿಷ ಕುದಿಸಬೇಕು. ಕೊನೆಯಲ್ಲಿ ಒಗ್ಗರಣೆ ಕೊಟ್ಟರೆ, ರುಚಿಯಾದ ಗೊಜ್ಜು ಸಿದ್ದ. ಮಾವಿನ ಹಣ್ಣಿನ ಗೊಜ್ಜನ್ನು ಅನ್ನದೊಂದಿಗೆ ತಿನ್ನಲು ರುಚಿ.

Friday, July 10, 2009

ಪೂರಿ / ದೋಸೆ ಮತ್ತು ಆಲೂಗಡ್ಡೆ ಪಲ್ಯ (ಬಾಜಿ*)

ಪೂರಿ ಮಾಡಲು ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು - 2 ಕಪ್
ಉಪ್ಪು - ರುಚಿಗೆ ತಕ್ಕಷ್ಟು
ನೀರು
ಕರಿಯಲು ಎಣ್ಣೆ

ಗೋಧಿ ಹಿಟ್ಟಿಗೆ ಉಪ್ಪು ಹಾಕಿ ನೀರು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ. ಕೊನೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಚೆನ್ನಾಗಿ ನಾದಿಕೊಂಡು 20-30 ನಿಮಿಷ ಮುಚ್ಚಿ ಇಡಿ. ನಂತರ ಸಣ್ಣ ಸಣ್ಣ ಗೋಲಿಗಳನ್ನು ಮಾಡಿ ಸ್ವಲ್ಪ ಎಣ್ಣೆ ಸವರಿಕೊಂಡು ಚಪಾತಿ ಗಿಂತ ಸಣ್ಣಗೆ ಸ್ವಲ್ಪ ದಪ್ಪಕ್ಕೆ ಲಟ್ಟಿಸಿ ಕೊಳ್ಳಿ. ಇದನ್ನು ಹದ ಉರಿಯಲ್ಲಿ ಎಣ್ಣೆಯಲ್ಲಿ ಎರಡೂ ಬದಿ ಕರಿದರೆ ಪೂರಿ ರೆಡಿ.
ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು:
ಬೆಳ್ತಿಗೆ ಅಕ್ಕಿ - 3 ಕಪ್
ಉದ್ದಿನಬೇಳೆ- 1 ಕಪ್
ಕಡಲೆಬೇಳೆ /ತೊಗರಿಬೇಳೆ - 2 ಚಮಚ
ಮೆಂತೆ - ½ ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಸಕ್ಕರೆ - 1 ಚಮಚ (ಬೇಕಿದ್ದರೆ ಮಾತ್ರ)
ಗಟ್ಟಿ ಅವಲಕ್ಕಿ - ¼ ಕಪ್ / ಒಂದು ಹಿಡಿಯಷ್ಟು
ಎಣ್ಣೆ ಅಥವಾ ತುಪ್ಪ - ದೋಸೆ ತಯಾರಿಸಲು ಬೇಕಾದಷ್ಟು

ಅಕ್ಕಿ ಹಾಗು ಬೇಳೆಗಳನ್ನು ಬೇರೆ ಬೇರೆಯಾಗಿ ನೀರಿನಲ್ಲಿ 6-8 ಗಂಟೆ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತರ ಇದನ್ನು ಚೆನ್ನಾಗಿ ನೀರಿನಲ್ಲಿ ತೊಳೆದುಕೊಳ್ಳಬೇಕು. ನೆನೆಸಿದ ಉದ್ದಿನಬೇಳೆ, ಕಡಲೆಬೇಳೆ, ಮೆಂತೆ, ಹಾಗು ಅವಲಕ್ಕಿ (5-10 ನಿಮಿಷ ನೀರಿನಲ್ಲಿ ನೆನೆಸಿ ತೆಗೆದುಕೊಂಡು) ಯನ್ನು ಸೇರಿಸಿ ನಯವಾಗಿ ಅರೆದು ಒಂದು ದೊಡ್ಡ ಪಾತ್ರೆಗೆ ಹಾಕಿ. ನಂತರ ಅಕ್ಕಿ ಹಿಟ್ಟನ್ನು ಚೆನ್ನಾಗಿ ಅರೆದು, ಒಂದು ಚಮಚ ಉಪ್ಪು ಮತ್ತು ಸಕ್ಕರೆ ಸೇರಿಸಿ, ರುಬ್ಬಿದ ಉದ್ದಿನ ಹಿಟ್ಟಿನೊಂದಿಗೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿಕೊಂಡು 8-10 ಗಂಟೆಗಳ ಕಾಲ ಮುಚ್ಚಿ ಇಡಬೇಕು.

ಮರುದಿನ ಬೆಳಗ್ಗೆ ಹೊತ್ತಿಗೆ ಹಿಟ್ಟು ಚೆನ್ನಾಗಿ ಹುದುಗು ಬಂದಿರುತ್ತದೆ. ಇದಕ್ಕೆ ಬೇಕಿದ್ದಷ್ಟು ಉಪ್ಪು (ಬೇಕಿದ್ದರೆ ಸ್ವಲ್ಪ ನೀರು) ಹಾಕಿ ಕಲಸಿ ಹಿಟ್ಟು ಹದ ಮಾಡಿಕೊಳ್ಳಿ. ಬಳಿಕ ಕಾದ ಕಾವಲಿಗೆ ಎಣ್ಣೆ ಸವರಿ ದೋಸೆಯನ್ನು ಹುಯ್ಯಿದು ಎರಡೂ ಕಡೆ ಕೆಂಬಣ್ಣ ಬರುವತನಕ ಬೇಯಿಸಿದರೆ ದೋಸೆ ಸಿದ್ದ.

ಆಲೂಗಡ್ಡೆ ಪಲ್ಯ ಮಾಡಲು ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ - 2-3 (ಬೇಯಿಸಿ, ಸಣ್ಣಗೆ ತುಂಡು ಮಾಡಿದ್ದು)
ಈರುಳ್ಳಿ - 1-2 (ಸಣ್ಣಗೆ ಹೆಚ್ಚಿ)
ಟೊಮೇಟೊ - 2-3 (ಸಣ್ಣಗೆ ಹೆಚ್ಚಿ)
ಹಸಿಮೆಣಸು - 2-3 (ಉದ್ದಕ್ಕೆ ಸೀಳಿ)
ಶುಂಠಿ - ½ ಇಂಚು
ಹಳದಿ ಪುಡಿ - ಸ್ವಲ್ಪ
ಗರಂ ಮಸಾಲ - ½ ಚಮಚ (ಬೇಕಿದ್ದರೆ ಮಾತ್ರ)
ಒಗ್ಗರಣೆಗೆ - ಸ್ವಲ್ಪ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕರಿಬೇವು, ಬೆಳ್ಳುಳ್ಳಿ

ಒಂದು ಪಾತ್ರೆಯಲ್ಲಿ 3-4 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿ ಯಾದ ನಂತರ ಸಾಸಿವೆ, ಉದ್ದಿನಬೇಳೆ, ಕರಿಬೇವು ಹಾಗು ಬೆಳ್ಳುಳ್ಳಿ ಸೇರಿಸಿ, ಒಗ್ಗರಣೆ ಮಾಡಿಕೊಳ್ಳಿ. ಬೆಳ್ಳುಳ್ಳಿ ಕೆಂಪಗಾದ ನಂತರ ಈರುಳ್ಳಿ ಹಾಕಿ 5-10 ನಿಮಿಷ ಹುರಿಯಬೇಕು. ಇದಕ್ಕೆ ಹಳದಿ ಪುಡಿ ಸೇರಿಸಿ, 1ನಿಮಿಷ ಹುರಿದುಕೊಂಡು , ಕೊನೆಯಲ್ಲಿ ಟೊಮೇಟೊ ಸೇರಿಸಿ 5 ನಿಮಿಷ ಹುರಿಯಬೇಕು. ನಂತರ ಜಜ್ಜಿದ ಶುಂಠಿ ಹಾಗು ¼ ಕಪ್ ನೀರು ಸೇರಿಸಿ ಹದ ಉರಿಯಲ್ಲಿ 5 ನಿಮಿಷ ಬೇಯಿಸಬೇಕು. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಬೇಯಿಸಿದ ಆಲೂಗಡ್ಡೆ ಸೇರಿಸಿ, ನಂತರ ಗರಂ ಮಸಾಲ ಪುಡಿ ಸೇರಿಸಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿಕೊಂಡು ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಆಲೂಗಡ್ಡೆ ಪಲ್ಯ ಸಿದ್ದ.



*- ದಕ್ಷಿಣ ಕನ್ನಡ ಹಾಗು ಮಂಗಳೂರಿನಲ್ಲಿ ಆಲೂಗಡ್ಡೆ ಪಲ್ಯಕ್ಕೆ ಬಾಜಿ ಹಾಗು ಬೇರೆ ಕಡೆಗಳಲ್ಲಿ ಬಾಂಬೆ ಸಾಗು ಎಂದು ಕರೆಯುತ್ತಾರೆ.
(ತುಂಬ ಚಳಿ ಇದ್ದಾಗ ಹಿಟ್ಟು ಹುಳಿ ಬರದಿದ್ದಲ್ಲಿ, ಒಂದು ಪಾತ್ರೆಯಲ್ಲಿ (ಕುಕ್ಕರಿನಲ್ಲಿ) ಸ್ವಲ್ಪ ನೀರು ಬಿಸಿ ಮಾಡಿ ಹಿಟ್ಟಿನ ಪಾತ್ರೆಯನ್ನು ಅದರ ಒಳಗೆ ಇಟ್ಟು ಮುಚ್ಚಿಟ್ಟರೆ ಹಿಟ್ಟು ಚೆನ್ನಾಗಿ ಹುದುಗು ಬರುತ್ತದೆ.)